Blogs Check out our latest blogs

ರಾಮನ ವ್ಯಕ್ತಿತ್ವ ವಿಕಾಸದಲ್ಲಿ ಕೈಕೇಯಿಯ ಪಾತ್ರ

ರಾಮನ ವ್ಯಕ್ತಿತ್ವ ವಿಕಾಸದಲ್ಲಿ ಕೈಕೇಯಿಯ ಪಾತ್ರ

ಯಾವ ಮಗನ ಅಭ್ಯುದಯಕ್ಕಾಗಿ ಕೈಕೇಯಿ ವರವನ್ನು ವಿನಿಯೋಗಿಸಿದ್ದಳೋ, ಆ ಅಭ್ಯುದಯದ ಸಂತೋಷ ಭರತನಿಗೂ ಆಗಲಿಲ್ಲ ಹಾಗೂ ಇದರ ಆನಂದವನ್ನು ತಾಯಿಯೂ ಅನುಭವಿಸಲಿಲ್ಲ. ಇಲ್ಲಿ ವರಗಳೇ ವಿಚಿತ್ರವಾಯಿತು. ಪ್ರಾಣ ಉಳಿಸಬೇಕಾಗಿದ್ದ ವರವನ್ನು ವಿನಿಯೋಗಿಸಿ, ಪ್ರಾಣವನ್ನು ತೆಗೆಯಬೇಕಾಯಿತು. ಸಂತೋಷ ಕೊಡಬೇಕಾಗಿದ್ದಕ್ಕಾಗಿ ವಿನಿಯೋಗಿಸಿದ್ದು, ದುಃಖಕ್ಕೆ ಕಾರಣವಾಯಿತು.

ಅಂಧ ಧೃತರಾಷ್ಟ್ರನ ಮಂದ ಬುದ್ಧಿ

ಅಂಧ ಧೃತರಾಷ್ಟ್ರನ ಮಂದ ಬುದ್ಧಿ

ಧೃತರಾಷ್ಟ್ರ ಕುರುಡನಾದರೂ ಬುದ್ಧಿ ಹೀನನಲ್ಲ. ಮಾತ್ರವಲ್ಲದೇ, ಧೃತರಾಷ್ಟ್ರವೆಂದರೆ, ರಾಷ್ಟ್ರವನ್ನು ಎತ್ತಿಹಿಡಿಯುವವನು ಎಂಬರ್ಥ ಬರುತ್ತದೆ. ದುರದೃಷ್ಟವಶಾತ್, ಈತನ ಮಕ್ಕಳು ಕೂಡ ರಾಷ್ಟ್ರವನ್ನು ಎತ್ತಿಹಿಡಿಯುವ ಕೆಲಸವನ್ನು ಮಾಡಲಿಲ್ಲ. ಸ್ವತಃ ಧೃತರಾಷ್ಟ್ರನಿಗೂ ಆ ಕೆಲಸ ಮಾಡಲಾಗಲಿಲ್ಲ. ಆದರೆ ಈತನ ಬುದ್ಧಿವಂತಿಕೆ ಬಳಕೆಗೆ ಬಂದದ್ದು, ತನ್ನ ಮಕ್ಕಳ ಅಭ್ಯುದಯಕ್ಕೆ ಹಾಗೂ ಅವರ ಪ್ರಯೋಜನಕ್ಕೆ ಮಾತ್ರ.

ರಾಮನಂತೆ ಅರಣ್ಯವಾಸಿಯಾದ ಭರತ 

ರಾಮನಂತೆ ಅರಣ್ಯವಾಸಿಯಾದ ಭರತ 

ಭರತನು ಸಿಂಹಾಸನವೇರಿ ರಾಜ್ಯವನ್ನು ಆಳಬಹುದಿತ್ತು. ಆದರೆ ಈತನ ಮನಸ್ಸು ಅಧಿಕಾರಕ್ಕಾಗಿ ಆಸೆ ಪಡಲಿಲ್ಲ. ರಾಮನ ಪ್ರೀತಿ, ಅಭಿಮಾನಗಳು ಆತನಿಗೆ ಶಕ್ತಿಯಾಗಿದ್ದವು. ರಾಮನೇ ರಾಜನಾಗಬೇಕೆಂದು ಬಯಸಿ, ಅಣ್ಣನನ್ನು ಹುಡುಕುತ್ತಾ ಚಿತ್ರಕೂಟದಲ್ಲಿ ಭೇಟಿಯಾಗುತ್ತಾನೆ. ಇದೊಂದು ಅಣ್ಣ-ತಮ್ಮಂದಿರ ಮಿಲನದ ಭೇಟಿ. ಭರತ, ದಶರಥನ ಮರಣವಾರ್ತೆಯನ್ನು ಹೇಳಿ, ದುಃಖಿಸಿ ಕಣ್ಣೀರಿಡುತ್ತಿರುವಾಗ, ರಾಮ ಸಮಾಧಾನ ಮಾಡಲು ಪ್ರಯತ್ನಿಸುತ್ತಾನೆ. ರಾಮ ಮಾಡಬೇಕಾದ ಕಾರ್ಯಗಳನ್ನು ತಾನು ನೇರವೇರಿಸಿದ ಸಂಗತಿಗಳನ್ನು ಹೇಳುತ್ತಾನೆ.

ಪರಾಕ್ರಮಿ ಪಾಂಡುವಿನ ಅರಣ್ಯರೋಧನ

ಪರಾಕ್ರಮಿ ಪಾಂಡುವಿನ ಅರಣ್ಯರೋಧನ

ಸಿಂಹಾಸನದ ಉತ್ತರಾಧಿಕಾರಿಗಾಗಿ ನಡೆದ ನಿಯೋಗದಲ್ಲಿ, ಕುರುಡನಾದ ಧೃತರಾಷ್ಟ್ರ ಅಂಗವಿಕಲತೆಯ ಕಾರಣಕ್ಕಾಗಿ ಅರ್ಹನಾಗಲಿಲ್ಲ. ಪಾಂಡು ತನ್ನ ಬಣ್ಣದ ಕಾರಣಕ್ಕೆ ಪೂರ್ಣ ಅರ್ಹನಲ್ಲವೆಂದು ನಿರ್ಧರಿಸಲಾಯಿತು. ಅನಂತರ ಜನಿಸಿದ ವಿದುರನು ದಾಸಿ ಪುತ್ರನೆಂದು ಅಧಿಕಾರ ಸಿಗಲಿಲ್ಲ. ಹೀಗಾಗಿ ಉತ್ತಮ ಅರ್ಹತೆಯಿಲ್ಲದೆ, ಮಧ್ಯಮ ಅರ್ಹತೆ ಹೊಂದಿರುವನು ಎಂಬ ಕಾರಣಕ್ಕೆ ಪಾಂಡು ಸಿಂಹಾಸನದ ಒಡೆಯನಾದ.

ಆತ್ಮರಹಸ್ಯ ವಿದ್ಯೆ ಪರಿಣಿತ ವಿದುರ

ಆತ್ಮರಹಸ್ಯ ವಿದ್ಯೆ ಪರಿಣಿತ ವಿದುರ

ಇಡೀ ಮಹಾಭಾರತದ ಉದ್ದಕ್ಕೂ ಎಲ್ಲಾ ಘಟನೆಗಳಿಗೂ ಸಾಕ್ಷಿಪುರುಷ ವಿದುರ. ವಂಶದ ಏಳಿಗೆಯನ್ನು ಹಾಗೂ ದೇಶದ ಕ್ಷೇಮವನ್ನು ಲಕ್ಷಿಸಿಯೇ ವ್ಯವಹಾರ ಮಾಡುತ್ತಿದ್ದ. ಮಹಾಭಾರತದ ಬಹುತೇಕ ಕಡೆ ಪಾಂಡವರಿಗಾಗುವ ಅನ್ಯಾಯವನ್ನು ತಡೆಯುತ್ತಾನೆ. ಕೌರವರಿಗೆ ಒಳ್ಳೆಯ ದಾರಿಯನ್ನು ತೋರಿಸುತ್ತಾ, ಸಲಹೆ ಸೂಚನೆಗಳನ್ನು ಕೊಡುತ್ತಾನೆ. ಅಲ್ಲದೇ, ಧೃತರಾಷ್ಟ್ರನನ್ನು ತಿದ್ದುವುದಕ್ಕೆ ಪ್ರಯತ್ನಿಸುತ್ತಾನೆ. ಆದರೆ ಇವೆಲ್ಲವೂ ಎಲ್ಲಿಯೂ ಪ್ರಯೋಜನಕ್ಕೆ ಬಾರದಾಯಿತು. ಆದರೆ ವಿದುರನ ಜೀವನದ ಸಾರ್ಥಕತೆ ಕಂಡುಬರುವುದು, ಸಂಧಾನಕ್ಕೆ ಬಂದ ಕೃಷ್ಣನಿಂದ. ಯಾರ ಮನೆಯಲ್ಲೂ ಉಳಿಯದೆ ಕೃಷ್ಣ, ನೇರವಾಗಿ ವಿದುರನ ಮನೆಗೆ ತೆರಳಿ ಭೋಜವನ್ನು ಸ್ವೀಕರಿಸುತ್ತಾನೆ.

ಸುಮಿತ್ರೆಯ ತ್ಯಾಗದ ಗುಣ

ಸುಮಿತ್ರೆಯ ತ್ಯಾಗದ ಗುಣ

ಸುಮಿತ್ರೆ, ಹಿರಿಯ ರಾಣಿಯ ಪಟ್ಟವೂ ಸಿಕ್ಕಿರಲಿಲ್ಲ ಹಾಗೂ ಪ್ರೀತಿಯ ರಾಣಿಯೂ ಆಗಿರಲಿಲ್ಲ. ಒಂದು ರೀತಿ ಎಲ್ಲವೂ ಇದ್ದು, ಏನು ಇಲ್ಲದಂತೆ ಬದುಕಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು. ಯಜ್ಞಪುರುಷ ತಂದ ಪಾಯಸವನ್ನು ಸ್ವೀಕರಿಸಿದ ನಂತರ, ಸುಮಿತ್ರೆಗೆ ಲಕ್ಷ್ಮಣ ಮತ್ತು ಶತ್ರುಘ್ನ ಎಂಬ ಮಕ್ಕಳು ಹುಟ್ಟಿದರು. ಆದರೆ ಒಬ್ಬ ಮಗನನ್ನು ಆಕೆ ರಾಮನಿಗೆ ಬಿಟ್ಟುಕೊಟ್ಟಳು. ಮತ್ತೊಬ್ಬ ಮಗನನ್ನು ಭರತನಿಗೆ ಬಿಟ್ಟುಕೊಟ್ಟಳು. ರಾಮನ ನೆರಳಿನಂತೆ, ಲಕ್ಷ್ಮಣ ಜೊತೆಗಿದ್ದನು. ಎರಡನೇ ಮಗ ಶತ್ರುಘ್ನ ಕೂಡ, ಭರತ ಹೋದ ದಾರಿಯಲ್ಲಿಯೇ ಸಾಗಿದನು.