Blogs Check out our latest blogs

Blogging the Reel World – GRAN TORINO [2008]

Blogging the Reel World – GRAN TORINO [2008]

Gran Torino is a drama film directed by and starring Clint Eastwood, released in 2008. The film follows the story of Walt Kowalski, a Korean War veteran who forms an unlikely bond with his Hmong neighbors after they save him from a gang of local thugs.

ರಕ್ತದ ಓಕುಳಿಗೆ ಕಾರಣವಾದ ಭೀಷ್ಮನ ತ್ಯಾಗ

ರಕ್ತದ ಓಕುಳಿಗೆ ಕಾರಣವಾದ ಭೀಷ್ಮನ ತ್ಯಾಗ

ಸಾಮಾನ್ಯರಿಗೆ ಯಾರಿಗೂ ಇಲ್ಲದ ಮರಣ ನಿಯಂತ್ರಣ ಭೀಷ್ಮನಿಗೆ ಇದ್ದದ್ದು ವಿಶೇಷ. 800 ವರ್ಷಗಳ ಕಾಲ ಈತ ಜೀವಿಸಿದ ಎಂದು ಕಥೆಗಳು ಹೇಳುತ್ತವೆ. ಇಷ್ಟು ವರ್ಷಗಳು ಜೀವಿಸಿರುವುದು ಸಂಶಯವಾಗಿದ್ದರೂ, ಸುದೀರ್ಘವಾದ ಬದುಕನ್ನು ಕಂಡಿದ್ದಾನೆ. ವರದ ಪ್ರಕಾರ ಸಾಯುವುದಕ್ಕೆ ಪ್ರಬಲವಾದ ಇಚ್ಛೆ ಹುಟ್ಟಬೇಕು. ಆಗ ಮಾತ್ರ ಮರಣ ಸಾಧ್ಯ. ಭೀಷ್ಮನ ದುರ್ದೈವಕ್ಕೆ ವರದ ಕಾರಣದಿಂದ ನೋಡಬಾರದನ್ನೆಲ್ಲಾ ನೋಡಿದ ಮತ್ತು ಸಾಕ್ಷಿಯಾಗಿ ನಿಂತ. ತನ್ನ ಮೊಮ್ಮಕ್ಕಳ ನೆತ್ತರಿನಲ್ಲೇ, ತಾನು ಕೈತೊಳೆಯಬೇಕಾದ ಅನಿವಾರ್ಯತೆ ಬಂದೊದಗಿತು. ಇದು ಒಬ್ಬನ ಜೀವನದ ದುರಂತ.

ದಶರಥನ ಚಾರಿತ್ರಿಕ ವ್ಯಕ್ತಿತ್ವ

ದಶರಥನ ಚಾರಿತ್ರಿಕ ವ್ಯಕ್ತಿತ್ವ

ದಶರಥನಿಗೆ ದಶರಥ ಎಂಬ ಹೆಸರು ಹೇಗೆ ಬಂದಿತ್ತು ಎಂಬ ಪ್ರಶ್ನೆಗಳನ್ನು ಹಲವರು ಕೇಳುತ್ತಿರುತ್ತಾರೆ. ಈತನಿಗೆ ‘ನೇಮಿ’ ಎಂಬ ಹೆಸರೂ ಇದೆ. ದೇವಲೋಕದಲ್ಲಿ ತಿಮಿಧ್ವಜ ಎಂಬ ರಾಕ್ಷಸನ ಜೊತೆ ಯುದ್ಧವಾಗುತ್ತದೆ. ಆದರೆ ಈ ರಾಕ್ಷಸ ಮಾಯಾವಿ. 10 ರೂಪ ತಾಳಿ, 10 ದಿಕ್ಕಿನಿಂದ ಆಕ್ರಮಣ ಮಾಡುತ್ತಾನೆ. ಈ ರಾಕ್ಷಸನನ್ನು ದಶರಥ, 10 ದಿಕ್ಕುಗಳಿಂದ ಎದುರಿಸುವುದಕ್ಕಾಗಿ ತನ್ನ 10 ರಥಗಳನ್ನು ತಿರುಗಿಸಿ ಹೋರಾಟ ಮಾಡುತ್ತಾನೆ. ಹೀಗಾಗಿ ದಶರಥ ಎಂಬ ಹೆಸರು ಬಂದಿತು.

ಮತ್ಸ್ಯಗಂಧಿಯ ಕಥನ

ಮತ್ಸ್ಯಗಂಧಿಯ ಕಥನ

ಸತ್ಯವತಿಯ ಸಂತಾನಕ್ಕೆ ಸಿಂಹಾಸನ ಸಿಗಬೇಕೆಂಬುದು ದಾಶರಾಜನ ಹಂಬಲ. ಸಿಂಹಾಸನ ನಿಜಕ್ಕೂ ಲಭಿಸಿತೇ?. ಸತ್ಯವತಿ ಹೆತ್ತ ಮಕ್ಕಳು ಚಿತ್ರಾಂಗದ ಮತ್ತು ವಿಚಿತ್ರವೀರ್ಯ. ಆದರೆ ಸ್ವಯಂ ಪತ್ನಿಯರಿಂದ ವಿಚಿತ್ರವೀರ್ಯ ಮಕ್ಕಳನ್ನು ಪಡೆಯಲಾಗಲಿಲ್ಲ. ಆದರೆ ಸತ್ಯವತಿಯ ಮತ್ತೊಬ್ಬ ಮಗನಾದ ವ್ಯಾಸರ ಮೂಲಕ ನಿಯೋಗ ಮಾಡಿದ್ದರಿಂದ ವಿಚಿತ್ರವೀರ್ಯನ ಕ್ಷೇತ್ರದಲ್ಲಿ ಸಂತಾನ ಬೆಳೆಯಿತು. ಇದು ಸತ್ಯವತಿಯ ಸಂತಾನ ಹೌದೋ? ಅಥವಾ ಅಲ್ಲವೋ? ಎಂಬ ಪ್ರಶ್ನೆ ಉಂಟಾಗುತ್ತದೆ. ಅಂದರೆ ನಮ್ಮ ತರ್ಕಬದ್ಧ ಯೋಚನೆಯಿಂದ ಎಲ್ಲವೂ ಸಾಧ್ಯವಾಗುತ್ತದೆ ಅಥವಾ ಸಾಧ್ಯವಾಗುವುದಿಲ್ಲ ಎಂದು ಹೇಳಲಾಗದು. ಹೀಗಾಗಿ ಸತ್ಯವತಿ ಸಂತಾನಕ್ಕೆ ಸಿಂಹಾಸನ ಲಭಿಸಿತು ಅಥವಾ ಸಿಗಲಿಲ್ಲ ಎಂದೂ ಹೇಳಬಹುದು.

ಬದುಕಿನ ಏಕತಾನತೆಯನ್ನು ಭೇದಿಸುವ ಕಥಾಹಂದರ: ಭುವನ್ ಶೋಮ್

ಬದುಕಿನ ಏಕತಾನತೆಯನ್ನು ಭೇದಿಸುವ ಕಥಾಹಂದರ: ಭುವನ್ ಶೋಮ್

ಸಿನಿಮಾದ ನಿರೂಪಣೆಯನ್ನು ವಾಯ್ಸ್ ಓವರ್ ಮೂಲಕ ಹೇಳಲಾಗಿದೆ. ಇದಕ್ಕೂ ಮುನ್ನ ಈ ಶೈಲಿ ಫ್ರೆಂಚ್ ನ್ಯೂ ವೇವ್ ಸಿನಿಮಾಗಳಲ್ಲಿ ಮಾತ್ರ ಕಾಣುತ್ತಿತ್ತು. ಇಲ್ಲಿ ಅಶರೀರವಾಣಿ (ವಾಯ್ಸ್ ಓವರ್) ತಂತ್ರಗಾರಿಕೆಯನ್ನು ಅದ್ಭುತವಾಗಿ ಬಳಸಲಾಗಿದೆ. ಆಶ್ಚರ್ಯ ಸಂಗತಿ ಎಂದರೆ, ಈ ವಾಯ್ಸ್ ಓವರ್ ಕೊಟ್ಟಿದ್ದು ಅಮಿತಾಬ್ ಬಚ್ಚನ್. ಆಗಿನ್ನೂ ಅವರು ಖ್ಯಾತರಾಗಿರಲಿಲ್ಲ. ಅನಿಮೇಷನ್ ಮೂಲಕ ಭುವನ್ ಶೋಮ್ ವ್ಯಕ್ತಿಯ ವ್ಯಕ್ತಿತ್ವವನ್ನು ಹೇಳಲಾಗಿದೆ. ಸಾಕ್ಷ್ಯಚಿತ್ರದ ಮಾದರಿಯಲ್ಲಿ ಪಾತ್ರಗಳನ್ನು ಪರಿಚಯಿಸಲಾಗಿದೆ.

ಜನ ಮನೋಧರ್ಮವೇ ರಾಮನ ವ್ಯಕ್ತಿತ್ವ

ಜನ ಮನೋಧರ್ಮವೇ ರಾಮನ ವ್ಯಕ್ತಿತ್ವ

ರಾವಣನ್ನು ಕೊಲ್ಲುವುದಕ್ಕಾಗಿಯೇ ರಾಮ ಜನ್ಮತಾಳಿದ. ಆದರೆ ರಾವಣನನ್ನು ಕೊಲ್ಲುವಾಗ, ತನ್ನ ಮೂಲ ಸ್ವರೂಪದ ಬಗ್ಗೆ ರಾಮನಿಗೆ ನೆನಪಿರುವುದಿಲ್ಲ. ಅಲ್ಲದೇ, ರಾವಣನನ್ನು ಕೊಲ್ಲಬೇಕಾದರೆ ರಾಮ ಪೂರ್ಣ ಮನುಷ್ಯನಾಗಿ ಇರಬೇಕಾಗಿತ್ತು. ಸಹಜವಾಗಿ ಪ್ರತಿಯೊಬ್ಬರೂ ದೈವತ್ವಕ್ಕೆ ಏರಬೇಕೆಂದು ಭಾವಿಸುತ್ತೇವೆ. ಆದರೆ ರಾಮಾಯಣದಲ್ಲಿ ದೈವತ್ವವೇ, ಪೂರ್ತಿ ಮನುಷ್ಯನಾಗುವುದಕ್ಕೆ ಶ್ರಮಿಸುತ್ತಿತ್ತು. ಅಂತೆಯೇ ಮನುಷ್ಯರಂತೆ ಸಹಜವಾಗಿ ಬಾಳುತ್ತಿರಬೇಕು. ರಾಮನು ಕಣ್ಣಿರಿಟ್ಟಿದ್ದಾನೆ, ಸಿಟ್ಟಾಗಿದ್ದಾನೆ ಮತ್ತು ಸಂತೋಷವನ್ನು ಒಳಗೊಂಡು ಎಲ್ಲವನ್ನೂ ಅನುಭವಿಸಿದ್ದಾನೆ.